NEWS FLASH

/home/student/Desktop/Flash.gif ನಮ್ಮ ಶಾಲೆಯ ನೂತನ ಎರಡು ಬ್ಲಾಗುಗಳು ಶುಭಾರಂಭಗೊಂಡಿವೆ="https://www.11264ssaupschevar.blogspot.com">&www.chevarschool.blogspot.com.........OUR TWO NEW BLOGS LAUNCHED.VISIT US..

VISIT OUR BLOG

ನಮ್ಮ ಇನ್ನೊಂದು ಬ್ಲಾಗನ್ನು ವೀಕ್ಷಿಸಿ.....www.11264ssaupschevar.blogspot.in............

Wednesday, December 17, 2014

Vallabha Bai Patel


ಡಿಸೆಂಬರ್ 15, ಸರ್ದಾರ್ ವಲ್ಲಭಬಾಯ್ ಪಟೇಲರ ಸಂಸ್ಮರಣಾ ದಿನ
1875-1950
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ,ಗುಜರಾತ್ ಮೂಲ
ಭಾರತೀಯ ಆಡಳಿತ ವ್ಯವಸ್ಥೆಗೆ ರೂಪ ಕೊಟ್ಟವರು,ಉಕ್ಕಿನ ಮನುಷ್ಯನೆಂದೇ ಖ್ಯಾತಿ
ಭಾರತದ ಪ್ರಥಮ ಉಪ ಪ್ರಧಾನಿ
ಭಾರತ ರತ್ನ ಪುರಸ್ಕೃತರು


ಕ್ಕಿನ ಮನುಷ್ಯ ಎಂದೇ ಕರೆಯಲ್ಪಟ್ಟ  ಸರ್ದಾರ್ ವಲ್ಲಭಬಾಯ್ ಪಟೇಲ್ 1875ರ ಅಕ್ಟೋಬರ್ 31ರಲ್ಲಿ ಗುಜರಾತಿನ ನಾಡಿಮೇಡ್ ಎಂಬ ಗ್ರಾಮದಲ್ಲಿ ಜನಿಸಿದರು.
ವಲ್ಲಭಬಾಯ್ ಪಟೇಲರು ಬಾಲ್ಯದಿಂದಲೂ ಧೈರ್ಯ ಮತ್ತು ಸಂಘಟನಾ ಚಾತುರ್ಯಗಳನ್ನು ಹೊಂದಿದ್ದರು.ಅಹಮ್ಮದಾಬಾದಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಇವರು ಬಹು ಬಹೇಗ ಜನಪ್ರಿಯರಾದರು.1917ರಲ್ಲಿ ಅಹಮ್ಮದಾಬಾದಿನ ಸ್ಯಾನಿಟೇಶನ್ ಕಮಿಷನರ್ ಆಗಿ ಆಯ್ಕೆಯಾದರು. ಗಾಂಧೀಜಿಯವರ  ಚಂಪಾರಣ್ಯ ಸತ್ಯಾಗ್ರ ಹ  ದಿಂದ  ಪ್ರಭಾವಿತರಾಗಿದ್ದ ಪಟೇಲ್ 1918ರಲ್ಲಿ ಖೇಡಾ ಪ್ರಾಂತದ ರೈತರನ್ನು ಬರಗಾಲದಲ್ಲೂ ಬ್ರಿಟಿಷರಿಗೆ ಅಧಿಕ ತೆರಿಗೆ ಕಟ್ಟದಂತಿರಲು ಗಾಂಧೀಜಿಯವರೇ ಸೂಚಿಸಿದರು.ಪಟೇಲರಿಗೆ ಇದರ ಜವಾಬ್ದಾರಿಯನ್ನು ವಹಿಸಿದರು. ರೈತರಿಗೆ ನ್ಯಾಯ ಒದಗಿಸಿದರು.1930ರಲ್ಲಿ ಅಸಹಕಾರ ಆಂದೋಲನದಲ್ಲಿ ಭಾಗವಹಿಸಿ ಬಂಧಿತರಾದರು.1931ರ ಕರಾಚಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾದರು. ಗಾಂಧೀಜಿಯವರೊಂದಿಗೆ ಸ್ವಾತಂತ್ರ್ಯಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.
ಸ್ವತಂತ್ರ ಭಾರತದ ಗೃಹ ಸಚಿವರಾಗಿ ಚಿಕ್ಕಚಿಕ್ಕ ಸಾಮ್ರಾಜ್ಯಗಳನ್ನು,ಒಂದೇ ಛತ್ರದಡಿಗೆ ತಂದರು.ಇದರಿಂದಾಗಿ ಅವರಿಗೆ ಉಕ್ಕಿನ ಮನುಷ್ಯ ಎಂಬ ಬಿರುದು ಬಂತು.
ವಲ್ಲಭಬಾಯ್ ಪಟೇಲರು 1950ರ ಡಿಸೆಂಬರ್ 15 ರಂದು ಅಸ್ತಂಗತರಾದರು.1991ರಲ್ಲಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.

No comments:

Post a Comment