ಚೇವಾರಿನಲ್ಲಿ ಓಝೋನ್ ದಿನಾಚರಣೆ
ಚೇವಾರು ಶ್ರೀ ಶಾರದಾ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಓಝೋನ್ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಶಾಲಾ
ಸಭಾಂಗಣದಲ್ಲಿ ಆಚರಿಸಲಾಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಹಿರಿಯ ಅಧ್ಯಾಪಕರಾದ
ಶ್ರೀ ಶಂಕರ ನಾರಾಯಣ ಭಟ್,ವಾತಾವರಣವನ್ನು ರಕ್ಷಿಸಲು ನಾವೆಲ್ಲರೂ ಶ್ರಮಿಸಬೇಕೆಂದು
ಕರೆಯಿತ್ತರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಧ್ಯಾಪಕ ರವಿಕುಮಾರ್,ವಾತಾವರಣದ ವಿವಿಧ ಪದರಗಳ
ಚಿತ್ರವನ್ನು ಪ್ರದರ್ಶಿಸಿ,ವಿವರಿಸಿದರು. ಓಝೋನ್ ಅಂದರೆ ಏನು,ಅದರ ಪ್ರಾಧಾನ್ಯತೆ,ಅದರ
ಕ್ಷಯಿಸುವಿಕೆ ಕುರಿತು ಚಿತ್ರ ಸಹಿತ ವಿವರಿಸಿದರು.
ಇನ್ನೋರ್ವ ಮುಖ್ಯ
ಅತಿಥಿಗಳಾಗಿ ಭಾಗವಹಿಸಿದ ಅಧ್ಯಾಪಕ ಪ್ರಸಾದ್ ರೈ,ಮನುಷ್ಯನ ಅನುಕೂಲತೆಗಾಗಿ,ಪರಿಸರ,
ವಾತಾವರಣವನ್ನು,ಹಾಳು ಮಾಡುತ್ತಿರುವುದು ವಿಷಾದನೀಯ,ಇದನ್ನು ರಕ್ಷಿಸುವುದು ನಮ್ಮ ಕರ್ತವ್ಯ
ಎಂದರು. . ಓಝೋನ್ ಹಾಗೂ ಬಹ್ಯಾಕಾಶ ಕುರಿತಾದ ರಸಪ್ರಶ್ನೆ ಸ್ಪರ್ಧೆ, ಏರ್ಪಡಿಸಲಾಯಿತು
ವಿದ್ಯಾರ್ಥಿಗಳು ಪ್ರಬಂಧಗಳನ್ನು
ಮಂಡಿಸಿದರು.ಜೈನಬತ್ ಅಸ್ಮೀನಾ ಕಾರ್ಯಕ್ರಮ ನಿರೂಪಿಸಿದರು.ಹಂಸಾನಾ ಸ್ವಾಗತಿಸಿದರು.ವಿದ್ಯಾಶ್ರೀ
ವಂದಿಸಿದರು.
No comments:
Post a Comment